Saturday 17 March 2018

ಕೊಟ್ರೇಶಿ .ವಿ



ವಿ.ಕೊಟ್ರೇಶಿ ಆದ ನಾನು 1993-94 ರಿಂದ 1996-97 ರವರೆಗೆ ಖಾಸಗಿ ಪ್ರೌಢ ಶಾಲೆಯಲ್ಲಿ ಮುಖ್ಯೋಪಾಧ‍್ಯಾಯನಾಗಿ ಕೆಲಸ ನಿರ್ವಹಿಸಿದ್ದೇನೆ.
1997 ಫೆಬ್ರವರಿಯಲ್ಲಿ ಸರಕಾರಿ ಪ್ರೌಢಶಾಲೆ ಗೆ ನೇಮಕಗೊಂಡೆನು. ಮೊದಲಯ ನನ್ನ ಕೆಲಸ ಕಲಬುರ್ಗಿ ಜಿಲ್ಲಿ ಸೇಡಂ ತಾಲೂಕಿನ ಹಾಬಾಳ (ಟಿ) ಗ್ರಾಮದಲ್ಲಿ ಪ್ರಾರಂಭವಾಯಿತು.2001 ರಂದ 2010 ರವರೆಗೆ  ಬಳ್ಳಾರಿ ಜಿಲ್ಲಾ ಹೊಸಪೇಟೆ ತಾಲೂಕಿನ ಸ.ಪ.ಪೂ.ಕಾಲೇಜ್ ಮರಿಯಮ್ಮನಹಳ್ಳಿ ಯಲ್ಲಿ ಕೆಲಸ ಮಾಡಿದ್ದೇನೆ . ಪ್ರಸ್ತುತ 2010 ರಿಂದ  ಬಳ್ಳಾರಿ ಜಿಲ್ಲಾ ಕೊಟ್ಟೂರು ತಾಲೂಕಿನ  ಹ್ಯಾಳ್ಯಾ ಗ್ರಾಮದ ಸರಕಾರಿ ಪ್ರೌಢಶಾಲೆ ಕಾರ್ಯ ನಿರ್ವಹಿಸಸುತ್ತಿದ್ದೇನೆ.
2012 ರಲ್ಲಿ  ಎಸ್ ಟಿ ಎಫ್  ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ, 2014-15,2015-16,2017-18 ರಲ್ಲಿ ಸಮಾಜವಿಜ್ಞ್ನಾನ ವಿಷಯದ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ, ಹ್ಯದ್ರಾಬಾದ್ ಕರ್ನಾಟಕದ ಬಿ ಇಡಿ; ಡಿ ಇಡಿ; ವಿದ್ಯಾರ್ಥಿಗಳಿಗೆ ಟೆಟ್ ಪರೀಕ್ಷೆಗೆ ಸಂಪನ್ಮೂಲ ತರಬೇತುದಾರನಾಗಿ ಕೂಡ್ಲಿಗಿ ತಾಲೂಕಿನಲ್ಲಿ  ಕೆಲಸ ಮಾಡಿದ್ದೇನೆ.
2016 ರಿಂದ ಡಿಜಿಟಲ್ ಟೀಮಿನ ಸದಸ್ಯನಾಗಿ ಅಳಿಲ ಸೇವೆ ಮಾಡಿದ್ದೇನೆ.
ಡಿಜಿಟಲ್ ಟೀಮಿನ ಕೆಲಸ ಕಾರ್ಯಗಳನ್ನ ನಮ್ಮ ನಾಡಿನ ಪೂಜ್ಯರಾದ  ಶ್ರೀ 1011 ತರಳುಬಾಳು ಜಗದ್ ಗುರುಗಳು  ಗುರುತಿಸಿ ಆಶೀರ್ವಾದ ಮಾಡಿದ್ದಾರೆ.
ನಮ್ಮ ಇಲಾಖೆಯ ಹೆಮ್ಮೆಯ  ಅಧಿಕಾರಿಗಳಾದ  ಹಿರೇಮಠ ಸರ್, ವೀರಣ್ಣ ಎಸ್ ಜತ್ತಿ ಸರ್, ಇನ್ನು ಮುಂತಾದ ವರು ಗುರುತಿಸಿದ್ದಾರೆ.
ನಮ್ಮ ನಾಡಿನ ಪಬ್ಲಿಕ್ ಟಿ ವಿ  ನಮ್ಮ ತಂಡವನ್ನ ಪಬ್ಲಿಕ್ ಹೀರೋ ಮಾಡಿ,ದಿನಾಂಕ:9-8-2016 ರಂದು ಪ್ರಚಾರ ಮಾಡಿದೆ.
ಡಿಜಿಟಲ್ ತಂಡ ಎಂದರೆ ಅದು ಜೀನಿಯಸ್, ಬುಧ್ದಿವಂತ,ಉನ್ನತಿ,ಉತ್ತೀರ್ಣ, ಇನ್ನೂ…….. ಎನೇನೋ ಆಗಿದೆ.
ಡಿಜಿಟಲ್ ತಂಡ ರಾಮಚಂದ್ರಸರ್ ಮುಖಂಡತ್ವದಲ್ಲಿ ಸಂತೋಷ್, ಮಹದೇವಪ್ಪ ಕುಂದರಗಿ, ವಾಸು ಶ್ಯಾಗೋಟಿ, ನಾಗಣ್ಣ ಶಹಬಾದ್, ಅಕ್ಕ ದಾನಮ್ಮ ಝಳಕಿ, ರಮೇಶ.ಚನ್ನಗಿರಿ,ರಮೇಶ.ಹುನಗುಂದ, ಮಲ್ಲಿಕಾರ್ಜುನ,ಪ್ರಹ್ಲಾದ್.ಪತ್ತಾರ್, ಪ್ರಶಾಂತ್,ಕಾಂತೇಶ‍್,ಪ್ರೇಮನ ಗ್ಔಡ, ವೀರೇಶ,ಪ್ರದೀಪ್ ಸರ್ ಮುಂತಾದ ಅತಿರಥ ಮಹಾರಥ ರಂತ ವರ ಜೊತೆ ಕೆಲಸ ಮಾಡೋದೆ ಒಂದು ಥ್ರಿಲ‍್ ಅಂತಾನೆ ಹೇಳಬಹುದು.
ಡಿಜಿಟಲ್ ತಂಡದ ಜೊತೆ ಕೆಲಸ ಮಾಡೋದು ಹಾಗೂ ಅದರಿಂದ ರೂಪಿತವಾದ ಸಂಪನ್ಮೂಲ ಬಳಕೆಯಿಂದ ವಿಷಯ ಸುಲಲಿತವಾಗಿದೆ.


0 comments:

Post a Comment